ಭಾನುವಾರ, ನವೆಂಬರ್ 1, 2020

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯ ಋಷಿ
ಮನು ನಿನಗೆ ನೀನು ಮನು ನಿನಗೆ ನೀನು 

ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮ ಶಾಸ್ತ್ರವೆನಗೊರೆಯ ಬೇಕೇನು
ನೊಂದವರ ಕಂಬನಿಯನೊರಸಿ ಸಂತೈಸುವರೆ
ಶಾಸ್ತ್ರ ಪ್ರಮಾಣ ಅದಕಿರಲೇ ಬೇಕೇನು

ಹಿಂದಿನ ಋಷಿಗಳು ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ "ಹೃದಯ"ವೇ ನಮಗೆ ಶ್ರೀ ಧರ್ಮ ಸೂತ್ರ 

- ಕು.ವೆಂ.ಪು


ಯೂಟ್ಯೂಬ್ ವಿಡಿಯೋ ಯೂಟ್ಯೂಬ್

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...