ಭಾನುವಾರ, ಅಕ್ಟೋಬರ್ 11, 2020

ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಪುರಂದರ ದಾಸರು

ಮಣ್ಣಿಂದ ಕಾಯ ಮಣ್ಣಿಂದ ||ಪ||
ಮಣ್ಣಿಂದ ಸಕಲ ದರುಶನಗಳೆಲ್ಲ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣು ಬಿಟ್ಟವರಿಗೆ ಆಧಾರವಿಲ್ಲ
ಅಣ್ಣಗಳಿರೆಲ್ಲರು ಕೇಳಿರಯ್ಯ ||ಅ||

ಅನ್ನ ಉದಕ ಊಟವೀಯೋದು ಮಣ್ಣು
ಬಣ್ಣ ಭಂಗಾರ ಬೊಕ್ಕಸವೆಲ್ಲ ಮಣ್ಣು
ಉನ್ನತವಾದ ಪರ್ವತವೆಲ್ಲ ಮಣ್ಣು
ಕಣ್ಣು ಮೂರುಳ್ಳವನ ಕೈಲಾಸ ಮಣ್ಣು ||

ದೇವರ ಗುಡಿ ಮಠ ಮನೆಯೆಲ್ಲ ಮಣ್ಣು
ಆವಾಗ ಅಡುವ ಮಡಕೆಯು ತಾ ಮಣ್ಣು
ಕೋವಿದರಸರ ಕೋಟೆಗಳೆಲ್ಲ ಮಣ್ಣು
ಪಾವನ ಗಂಗೆಯ ತಡಿಯೆಲ್ಲ ಮಣ್ಣು ||

ಭಕ್ತ ಭರಣ ಧಾನ್ಯ ಬೆಳವುದೆ ಮಣ್ಣು
ಸತ್ತರವನು ಹುಳಿ ಸುಡುವುದೆ ಮಣ್ಣು
ಉತ್ತಮವಾದ ವೈಕುಂಠವೆ ಮಣ್ಣು
ಪುರಂದರವಿಠಲನ್ನ ಪುರವೆಲ್ಲ ಮಣ್ಣು ||


ಏನಿದು ಮಣ್ಣು: ‘ಮಣ್ಣು ಘನ, ದ್ರವ ಹಾಗೂ ಅನಿಲರೂಪದ ವಸ್ತುಗಳಿಂದ ಕೂಡಿದ ಸಂಕೀರ್ಣ ವ್ಯವಸ್ಥೆ. ಈ ಘನವಸ್ತುಗಳು ವ್ಯತ್ಯಾಸ ಹೊಂದುವ ಖನಿಜ ವಸ್ತುಗಳನ್ನು ಒಳಗೊಂಡಿರುತ್ತದೆ. ಈ ಖನಿಜ ವಸ್ತುಗಳು ಕಣ್ಣಿಗೆ ಕಾಣುವ ಹಾಗೂ ಕಾಣದಷ್ಟು ಸೂಕ್ಷ್ಮವಾಗಿಯೂ ಇರುತ್ತವೆ. ಲಕ್ಷಾಂತರ ನಿರ್ಜೀವಿ ಹಾಗೂ ಸಜೀವಿ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುತ್ತದೆ. ಗಾಳಿ ಮತ್ತು ನೀರು ಮಣ್ಣಿನಲ್ಲಿರುವ ನಿರ್ವಾತವನ್ನು ಆಕ್ರಮಿಸುತ್ತವೆ’ ಎನ್ನುತ್ತಾರೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಅಶೋಕ ಪಾತೇನವರ.

ಮಣ್ಣಿಂದಲೇ ಜೀವ: ‘ನೀರು ಮತ್ತು ಗಾಳಿಯನ್ನು ಸಂಗ್ರಹಿಸಿಕೊಳ್ಳುವ ಮಣ್ಣಿನ ಸಾಮರ್ಥ್ಯವೇ ‘ಜೀವ’ ಸೃಷ್ಟಿಗೆ ಕಾರಣವಾಗಿದೆ. ಇದು ಸಸ್ಯದ ಬೆಳವಣಿಗೆಯಲ್ಲಿ ಕಾಣಬಹುದು. ‘ಫಲವತ್ತ’ ಮಣ್ಣು ಎಂದರೆ  ಪೋಷಕಾಂಶ, ನೀರು ಹಾಗೂ ಗಾಳಿ ಸಂಬಂಧಗಳನ್ನು ಒಳಗೊಂಡಿರುವುದು. ಮಣ್ಣಿನ ಭೌತಿಕ ಸ್ಥಿತಿಗಳು ಅನುಕೂಲಕರವಗಿರುವುದು. ಇದರಿಂದಾಗಿ ಸಸ್ಯಗಳ ಬೆಳವಣಿಗೆ ಸಾಧ್ಯ’ ಎನ್ನುತ್ತಾರೆ ಅವರು.

ಮಣ್ಣಿನ ಸಾರ: ‘ಈಚಿನ ತನಕ ಅಧಿಕ ಇಳುವರಿಗಾಗಿ ಮಣ್ಣಿಗೆ ಹೆಚ್ಚಿನ ಪೋಷಕಾಂಶ ಒದಗಿಸುವ ಕಡೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿತ್ತು. ಹೀಗಾಗಿ ಮಣ್ಣಿನ ‘ರಸಾಯನಶಾಸ್ತ್ರ’ಕ್ಕೆ ಪ್ರಾಮುಖ್ಯತೆ ಸಿಕ್ಕಿತ್ತು. ಕಳೆದ ಐದಾರು ದಶಕಗಳಲ್ಲಿ ಫಲವತ್ತತೆಗೆ ಸಂಬಂಧಿಸಿದಂತೆ ಮಣ್ಣಿನ ಭೌತಗುಣಧರ್ಮಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಗರಿಷ್ಠ ಇಳುವರಿಗಾಗಿ ಮಣ್ಣಿನಲ್ಲಿರುವ ಪೋಷಕಾಂಶಗಳ ಮಟ್ಟವಷ್ಟನ್ನೇ ತಿಳಿಯುವುದು ಸಾಕಾಗಲಾರದು.  ವಾಯುಗುಣ, ಬೆಳೆಗಳು ಹಾಗೂ ವ್ಯವಸಾಯ ಕ್ರಮಗಳ ವ್ಯತ್ಯಾಸ ಹೊಂದುವ ಸ್ಥಿತಿಗಳ ಸಂಕೀರ್ಣ ವ್ಯವಸ್ಥೆಯ ಭೌತಿಕ ಹಾಗೂ ಯಾಂತ್ರಿಕ ವರ್ತನೆಯನ್ನು ತಿಳಿಯುವುದು ಅವಶ್ಯಕವಾಗಿದೆ’ ಎನ್ನುತ್ತಾರೆ ಅವರು.

‘ಮಣ್ಣಿನ ಭೌತಿಕ ಸ್ಥಿತಿಗಳೆಂದರೆ ರಚನೆ ಮತ್ತು ಉಳುಮೆ, ಗಾಳಿಯಾಡುವಿಕೆ, ನೀರನ್ನು ಹಿಡಿಯುವ ಸಾಮರ್ಥ್ಯ, ಇತ್ಯಾದಿ ಒಳಗೊಂಡಿದೆ. ಸಾವಯವ ವಸ್ತು ಸಸ್ಯ ಪೋಷಕಗಳ ಭಂಡಾರ. ಅದರಲ್ಲಿಯೂ ಮುಖ್ಯವಾಗಿ ಮಣ್ಣುಗಳಲ್ಲಿರುವ ಸಾರಜನಕದ ಭಂಡಾರ’ ಎನ್ನುತ್ತಾರೆ 



ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...